ಇತರೆ
ಮನೆಯಲ್ಲಿದ್ದರೆ ಮೊಗ್ಗು, ಹೊರಗೆ ಬಂದರೆ ಹೂ. - ಛತ್ರಿ
ಹಗ್ಗ ಆಸೈತೆ, ಆನೆ ಮಲಗೈತೆ. - ಕುಂಬಳಕಾಯಿ
ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ. - ತಿಲಕ ಅಥವಾ ಬೊಟ್ಟು
ಕಳ್ಳ ಪೋಲೀಸ್ ಇಬ್ಬರೂ ಓಡ್ತಾ ಇರ್ತಾರೆ; ಎಷ್ಟೊಂದು ಬಾರಿ ಪೋಲೀಸ್ ಕಳ್ಳನ್ನ ಹಿಡ್ಕೊತಾರೆ ಮತ್ತೆ ಬಿಟ್ಟುಬಿಡ್ತಾರೆ. - ಗಡಿಯಾರದ ಮುಳ್ಳುಗಳು
ಅಮ್ಮನ ಸೀರೆ ಮಡಸೋಕಾಗಲ್ಲ; ಅಪ್ಪನ ದುಡ್ಡು ಎಣಿಸೋಕಾಗಲ್ಲ. - ಆಕಾಶ ಮತ್ತು ನಕ್ಷತ್ರಗಳು
ಹೊಟ್ಟೆ ಒಳಗೆ ಕೈ ಹಾಕಿದರೆ ಬಾಯಿ ಬಿಡುತ್ತೆ - ಬೀಗ ಮತ್ತು ಬೀಗದ ಕೈ
ಕೊಟ್ಟು ಕೆಟ್ಟ - ಬಲಿ ಚಕ್ರವರ್ತಿ
ಕೊಡದೇ ಕೆಟ್ಟ- ದುರ್ಯೋಧನ
ಮುಟ್ಟಿ ಕೆಟ್ಟ - ದುಶ್ಯಾಸನ
ಮುಟ್ಟದೇ ಕೆಟ್ಟ - ರಾವಣ
ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲಾ ಎರಡೇ ಬುರುಡೆ - ಸೂರ್ಯ, ಚಂದ್ರ
ಅಂಗೈ ಅಗಲ ಗದ್ದೆ, ಗದ್ದೆಯಲ್ಲಿ ನೀರು, ನೀರಲ್ಲಿ ಬೇರು ಆ ಬೇರಿಗೆ ಬೆಂಕಿ - ದೀಪ
ಒಳಗೆ ಹೋದಾಗ ಮೂರು ಬಣ್ಣ, ಹೊರಗೆ ಬಂದಾಗ ಓಂದೇ ಬಣ್ಣ - ಎಲೆ, ಅಡಿಕೆ, ಸುಣ್ಣ
ಅಣ್ಣ ಎಂದರೆ ತೆರೆಯುತ್ತೆ; ತಮ್ಮ ಎಂದರೆ ಮುಚ್ಚುತ್ತೆ - ತುಟಿಗಳು
ಸಿಂಹವುಂಟು ಅರಣ್ಯವಲ್ಲ; ಅಕ್ಷರಗಳುಂಟು ಪುಸ್ತಕವಲ್ಲ; ದುಂಡಾಗಿರುವೆ ಪುಸ್ತಕವಲ್ಲ. -ನಾಣ್ಯ
ಕಪ್ಪೆ ಮುಟ್ಟದ ಕೈಲಾಸದ ನೀರು -ಎಳೆನೀರು
ಗರಿಕೆ ಆಸೆ ದೇವರು ವರ್ಷಕ್ಕೊಮ್ಮೆ ಬರ್ತಾನೆ - ಗಣಪತಿ
ಊರೆಲ್ಲಾ ಸುತ್ತುತ್ತೆ ಮನೆ ಬಾಗಿಲಾಲ್ಲಿ ಬಂದು ನಿಲ್ಲುತ್ತೆ. - ಚಪ್ಪಲಿಗಳು
ಕಲ್ಲನ್ನು ತುಳಿಯುತ್ತೆ; ಮುಳ್ಳನ್ನು ಮೂಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ. - ಚಪ್ಪಲಿಗಳು
ಅಂಗಡಿಯಲ್ಲಿ ತರೋದು; ಮನೆಯಲ್ಲಿ ಕೂತ್ಕೊಂಡು ಅಳೋದು. - ಈರುಳ್ಳಿ.
ಬೆಳ್ಳಿ ತಿಂತಾರೆ! ಚಿನ್ನ ಬಿಸಾಡ್ತಾರೆ. - ಬಾಳೆಹಣ್ಣು
ಹೋದ ನೇಂಟ ! ಬಂದ ನೇಂಟ; ಬಂದ ದಾರಿ ಗೊತ್ತಿಲ್ಲ. - ನೆರಳು
ಹೋಗುತ್ತಾ ಬರುತ್ತಾ ಇರುವುದು - ಸಿರಿತನ , ಬಡತನ
ಹೋದ ಮೇಲೆ ಬರಲಾರದುದು - ಮಾನ ,ಪ್ರಾಣ
ಎರಡು ಮನೆಗೆ ಒಂದೇ ದೂಲ. - ಮೂಗು
ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ. - ದೀಪದ ಬೆಳಕು
ಒಳ್ಳೆ ಕೋಳಿ ಮುಳ್ಳಲ್ಲಿ ಮೊಟ್ಟೆ ಇಕ್ಕದೆ. - ನಿಂಬೆ ಹಣ್ಣು.
ಅಕ್ಕನ ಮನೆಗೆ ತಂಗಿ ಹೋಗಬಹುದು; ಆದರೆ ತಂಗಿಯ ಮನೆಗೆ ಅಕ್ಕ ಹೋಗೋಕಾಗಲ್ಲ. - ಬಿಂದಿಗೆ, ಚೆಂಬು
ಊರಿಗೆಲ್ಲಾ ಒಂದೇ ಕಂಬಳಿ. - ಆಕಾಶ
ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ. -ಮೊಟ್ಟೆ
ಹಸಿರು ಕೋಟೆ ಒಳಗಡೆ ಕೆಂಪು ಸಾಮ್ರಾಜ್ಯ; ಕೆಂಪು ಸಾಮ್ರಾಜ್ಯದೊಳಗೆ ಕಪ್ಪು ಸೈನಿಕರು. - ಕಲ್ಲಂಗಡಿ
ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ, ನಿಮ್ಮಪ್ಪನೂ ಎತ್ತಲಾರ; ನಮ್ಮಪ್ಪನೂ ಎತ್ತಲಾರ. - ಸೂಜಿ
ಚೋಟುದ್ದ ಹುಡುಗಿಗೆ ಮಾರುದ್ದ ಜಡೆ. - ಸೂಜಿ, ದಾರ.
ಕಪ್ಪುಂಟು ಕಸ್ತೂರಿಯಲ್ಲ, ಬಿಳುಪುಂಟು ಸುಣ್ಣವಲ್ಲ, ನೀರುಂಟು ಬಾವಿಯಲ್ಲ, ರೆಕ್ಕೆಯುಂಟು ಪಕ್ಷಿಯಲ್ಲ. - ಕಣ್ಣು.
ಅವ್ವ ಮುಳ್ಳಿ, ಮಗಳು ಕೆಂಪಗೆ ಚೆಂದಾಗವ್ಳೆ. - ಹಲಸಿನ ಹಣ್ಣು.
ಊರುಂಟು ಜನರಿಲ್ಲ; ರಸ್ತೆಯುಂಟು ವಾಹನವಿಲ್ಲ; ನದಿಯುಂಟು ನೀರಿಲ್ಲ. - ಭೂಪಟ
ಗಾದೆ ಮಾತುಗಳು:
- ಅತಿ ಆಸೆ ಗತಿಗೇಡು.
- ಆಸೆಯೆ ದುಃಖಕ್ಕೆ ಮೂಲ
- ಕಾಯಕವೇ ಕೈಲಾಸ
- ಹಗಲು ಕಂಡ ಬಾವಿಗೆ ಇರುಳು ಬಿದ್ದ ಹಾಗೆ.
- ಉಪಾಯಬಲ್ಲವನಿಗೆ ಅಪಾಯವಿಲ್ಲ.
- ಸಿರಿತನ ಬಂದಾಗ ಕರೆದು ದಾನವ ಮಾಡು.
- ಹಾಸಿಗೆಯಿದ್ದಷ್ಟು ಕಾಲು ಚಾಚು.
- ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು.
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
- ಮನೆಯೇ ಮಂತ್ರಾಲಯ; ಮನಸೇ ದೇವಾಲಯ.
- ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನೂ ಸಾಲದು.
- ಯಥಾ ರಾಜ; ತಥಾ ಪ್ರಜಾ.
- ಹಿಸಿದಾಗ ಹಳಸನ್ನವೂ ಮೃಷ್ಟಾನ್ನವಾದೀತು.
- ಹಸಿದು ಹಲಸಿನ ಹಣ್ಣು ತಿನ್ನು; ಹೊಟ್ಟೆ ತುಂಬಿದ ಮೇಲೆ ಮಾವಿನ ಹಣ್ಣು ತಿನ್ನು.
- ಹುಟ್ಟಿದವ ಸಾಯಲೇಬೇಕು.
- ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು.
- ಯೋಗ ಇದ್ದಷ್ಟೇ ಭೋಗ.
- ತಾಳಿದವನು ಬಾಳಿಯಾನು.
- ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ.
- ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು.
- ಬೆಳೆಯುವ ಸಿರಿ ಮೊಳ್ಕೆಯಲ್ಲಿಯೆ.
- ತಾಯಿಯೆ ಮೊದಲ ದೇವರು.
- ಊಟಕ್ಕಿಲ್ಲದ ಉಪ್ಪಿನಕಾಯಿ ಸಮಯಕ್ಕೆ ಆಗದ ಸಂಪತ್ತು ಎಷ್ಟಿದ್ದರೇನು?
- ಶಿವ ಪೂಜೆ ಮಧ್ಯೆ ಕರಡಿ ಬಿಟ್ಟ ಹಾಗೆ.
- ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ.
- ಉಪ್ಪರಿಗೆ ಮೇಲಿದ್ದರೂ ತಿಪ್ಪೆ ಮರೀಬಾರ್ದು.
- ಬೆಳ್ಳಗಿರುವುದೆಲ್ಲ ಹಾಲಲ್ಲ.
- ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೇ?
- ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.
- ಕೈಲಾಗದವನು ಮೈ ಪರಚಿಕೊಂಡ.
- ನೋಡುವ ಕಣ್ಣಿರಲು ಸೌಂದರ್ಯ; ಕೇಳುವ ಕಿವಿಯಿರಲು ಸಂಗೀತ.
- ಕೋಳಿ ಕೂಗಿದರೆ ಬೆಳಗಾಗುವುದೇ?
- ಕುಣಿಯಲಾರದವಳು ನೆಲ ಡೊಂಕು ಎಂದಳಂತೆ.
- ತಂದೆ ತಾಯಿ ಇಬ್ಬರು ಕಣ್ಣಿಗೆ ಕಾಣುವ ದೇವರು.
- ಆಕಳು ಕಪ್ಪಾದರೆ ಹಾಲು ಕಪ್ಪೇ?
- ಸಗಣಿಯವನೊಂದಿಗೆ ಗೆಳೆತನಕ್ಕಿಂತ, ಗಂಧದವನೊಂದಿಗೆ ಗುದ್ಧಾಟವೇ ಲೇಸು.
- ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
- ಬಯಸಿ ಬಯಸಿ ಮದುವೆಯಾದ್ರೆ ಬಡಿಯೊ ಗಂಡ ಸಿಕ್ಕಿದ.
- ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು.
- ಕಾಗೆಗೇಕೆ ಕಾಡಿಗೆ; ಗೂಡಿಗೇಕೆ ಬಾಡಿಗೆ.
- ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ.
- ಸಿರಿತನ ಬ್ಂದಾಗ ಊರೆಲ್ಲ ನೆಂಟರೇ.
- ಆಳಾಗಿ ದುಡಿ; ಅರಸನಾಗಿ ಉಣ್ಣು.
- ಬೇಲೆನೇ ಎದ್ದು ಹೊಲ ಮೇಯ್ದ ಹಾಗೆ.
- ಆರು ಕಾಸಿನ ಸಂಬಳ ಆದರೂ ಅರಮನೆಯ ಕೆಲಸ ಮಾಡು.
- ಆಲಸ್ಯಾತ್ ಅಮೃತಂ ವಿಷಂ.
- ಆರುವ ದೀಪಕ್ಕೆ ಕಾಂತಿ ಹೆಚ್ಚು.
- ಊಟಕ್ಕೆ ಮೊದಲಿರಬೇಕು; ಜಗಳಕ್ಕೆ ಹಿಂದಿರಬೇಕು.
- ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ.
- ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
- ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
- ಯಾವ ಹುತ್ತದಲ್ಲಿ ಯಾವ ಹಾವಿದೆಯೊ.
- ಅಪ್ಪನ ಮಾತು ಆನೆಯ ಬಲ.
- ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ.
- ಮನೆ ದೂರವಾದರೆ ಮನ ದೂರವೇ?
- ತೊಟ್ಟಿಲೊಳಗಿನ ಕೂಸಾದರೂ ಅಳದೆ ಹಾಲು ಕೊಡರು.
- ಆಪತ್ತಿಗಾದವನೇ ನೆಂಟ.
- ನಡೆಯುವವನೇ ಎಡವುತ್ತಾನೆ.
- ಅಣ್ಣ ತಮ್ಮನ ಬೇರೆ ಮಾಡಬೇಡ.
- ಕೆಟ್ಟ ಮೇಲೆ ಬುದ್ಧಿ ಬಂತು.
- ಆರೋಗ್ಯವೇ ಭಾಗ್ಯ.
- ಆಳು ನೋಡಿದ್ರೆ ಅಬ್ಬಬ್ಬಾ, ಬಾಳು ನೋಡಿದ್ರೆ ಬಾಯಿ ಬಡ್ಕೋಬೇಕು.
- ಕತ್ತೆ ಮರಿ ಚೆಂದ, ಮುತ್ತುಗದ ಹೂ ಚೆಂದ.
- ತಿಳಿದು ತಪ್ಪು ಮಾಡಿದವನಿಗೆ ನೂರು ದೇವರಾದರೆ, ತಿಳಿಯದೆ ತಪ್ಪು ಮಾಡಿದವನಿಗೆ ಸಾವಿರ ದೇವರು.
- ಕೋಟಿ ಕೊಟ್ಟರೂ ಸೂರ್ಯನಿಲ್ಲದೆ ಜಗಕೆ ಬೆಳಕಿಲ್ಲ.
- ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿಸಿಕೊಂಡ.
- ಅಳಿವುದೇ ಕಾಯ ಉಳಿವುದೇ ಕೀರ್ತಿ.
- ಅಳಿಯ ಅಲ್ಲ ಮಗಳ ಗಂಡ.
- ಮಾಡಿದವನ ಪಾಪ ಹೇಳಿದವನ ಬಾಯಿಗೆ.
- ಆಡಿದರೆ ಅರಗಿಣಿ ಕಾಡಿದರೆ ನಾಗರ ಕಾಟ.
- ಪುಸ್ತಕದಲ್ಲಿರೋ ಬಧನೆಕಾಯಿ ಸಾರಿಗೆ ಬಂದಾತೆ.
- ಶೂರನಗಿರಬೇಕು. ಆದರೆ ಜಂಬ ಕೊಚ್ಚಿಕೊಳ್ಳಬಾರದು.
- ವಿದ್ಯೆಗೆ ವಿನಯವೇ ಭೂಷಣ.
- ಒಣ್ಅಗಿದೆ ಅಂತ ಗರಿಕೆಯನ್ನು; ಬಡಕಲು ಅಂತ ಶತ್ರುಗಳನ್ನು ಕಡೆಗಣಿಸಬಾರದು.
- ಹುಟ್ಟುತ್ತಾ ಅಣ್ಣತಮ್ಮಂದಿರು; ಬೆಳೆಯುತ್ತಾ ದಾಯಾದಿಗಳು.
- ಶುಭ ನುಡಿಯೋ ಸೋಮ ಅಂದ್ರೆ ಗೂಬೆ ಕಾಣಸ್ತಲ್ಲೊ ಮಾಮ ಅಂದ.
- ಎದ್ದರೆ ಕಾಲು ಹಿಡಿಯುತ್ತಾರೆ; ಕುಂತರೆ ಜುಟ್ಟು ಹಿಡಿಯುತ್ತಾರೆ.
- ಸಂಕಟ ಬಂದಾಗ ವೆಂಕಟ್ರಮಣ.
- ತುಂಬಿದ ಕೊಡ ತುಳುಕದು.
- ಬೆಕ್ಕಿಗೆ ಆಟ; ಇಲಿಗೆ ಪ್ರಾಣ ಸಂಕಟ.
- ಏರಿದವನು ಬಾಗಿರಬೇಕು.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ಅಳೋ ಗಂಡ್ಸನ್ನು ನಗೋ ಹೆಂಗ್ಸನ್ನು ನಂಬಬಾರದು.
- ಅಯ್ಯೋ ಪಾಪ! ಅಂದ್ರೆ ಅರ್ಧ ಆಯಸ್ಸು.
- ಆಡುವವ ಆಡಿದ್ರೆ ನೋಡುವವಗೆ ಸಿಗ್ಗು.
- ಅಂಜಿದವನ ಮೇಲೆ ಕಪ್ಪೆ ಹಾರಿದಂಗೆ.
- ಬಸವನ ಹಿಂದೆ ಬಾಲ.
- ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತದೆ.
- ಅಲ್ಲದ ಕನಸು ಕಂಡ್ರೆ ಎದ್ದುಕುಂಡ್ರು.
- ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.
- ಕೊಟ್ಟ ಹೆಣ್ಣು ಕುಲಕ್ಕೆ ಹೊರಗು.
- ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ.
- ಹಣದಿಂದ ಶ್ರೀಮಂತಿಕೆಯಲ್ಲ; ಗುಣದಿಂದ ಶ್ರೀಮಂತಿಕೆ.
- ನೂಲಿನಂತೆ ಸೀರೆ; ತಾಯಿಯಂತೆ ಮಗಳು.
- ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ.
- ವಿನಾಶಕಾಲೇ ವಿಪರೀತ ಬುದ್ಧಿ.
- ಪಾಪಿ ಸಾಗರಕ್ಕೆ ಬಿದ್ದರೂ ಮೊಣಕಾಲುದ್ದ ನೀರು.
- ಕಥೆ ಹೆಳೋಕೆ ಹೂಗುಟ್ಟೋರಿರಬೇಕು; ನೆಟ್ಟಗೆ ಬಾಳೋಕೆ ಛೀಗುಟ್ಟೋರಿರಬೇಕು.
- ಹುತ್ತ ಹೊಲ ಬಿತ್ತದೆ ಹೋಯಿತು; ಕೊಟ್ಟ ಸಾಲ ಕೇಳದೆ ಹೋಯಿತು.
- ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು.
- ಚಿತೆ ಮನುಷ್ಯನನ್ನು ಸುಟ್ಟರೆ, ಚಿಂತೆ ಮನಸನ್ನು ಸುಡುತ್ತದೆ.
- ಮಾತು ಬೆಳ್ಳಿ, ಮೌನ ಬಂಗಾರ.
- ಗುಣವಂತೆ ಇರುವ ಗುಡಿಸಲೇ ಲೇಸು.
- ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ.
- ಮಾತು ಆಡಿದರೆ ಹೋಯ್ತು; ಮುತ್ತು ಹೊಡೆದರೆ ಹೋಯ್ತು; ಹೊತ್ತು ಕಳೆದರೆ ಹೋಯ್ತು.
- ಚಿಕ್ಕಂದಿನ ವಿದ್ಯೆ ಚೂಡಾರತ್ನ.
Comments
Post a Comment